ಹೋರಾಟಕೆ

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ
ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ||

ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು
ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು
ಮುರುಕು ಗುಡಿಸಲಲ್ಲಿ ದೀಪ ಮಿಣುಕು ಕುಟುಕು ಜೀವಕೆ
ಕಣ್ಣ ನೀರ ತೊಡೆದು ಎಣ್ಣೆ ಹೊಯ್ದು ಜ್ವಾಲೆ ಉರಿಸಲು ||೧||

ಹರಕು ತೇಪೆ ಬಟ್ಟೆಗಳಿಗೆ ರಕ್ಷೆ ಕವಚ ಕೊಡಲಿಕೆ
ಒಡಕು ಗಡಿಗೆ ಗಂಜಿಯಗಳ ಅಕ್ಷಯಾನ್ನ ಮಾಡಲಿಕೆ
ಎಲುಬು ಗೂಡು ಸುಕ್ಕು ಚರ್ಮಗಳಲಿ ಶಕ್ತಿ ತುಂಬಲು
ಮಾಂಸ ಭಕ್ಷಕಾಸುರರನು ಮಸಣ ಮನೆಗೆ ನೂಕಲು ||೨||

ಆಕಳಂತೆ ಮೇಕೆಯಂತೆ ಹುಲಿಯು ತೋಳ ಮೆರೆದಿವೆ
ಮೊಲಗಳನ್ನು ಕಚ್ಚಿತಿಂಬ ಹದ್ದುಗದ್ದುಗೇರಿವೆ
ಮತ ಧರ್ಮದ ಮತ್ತಿನಲ್ಲಿ ಯುಗಯುಗಗಳೆ ಕಳೆದಿವೆ
ಕೊಳೆತ ಬಾವಿ ಹಳಸುನಾತ ಕುಡಿಯುತ ಕಾಲೆಳೆದಿವೆ ||೩||

ನಾಮ ಪಟ್ಟಿದಾರ ಜುಟ್ಟುಗಳನು ಒಗೆದು ಬನ್ನಿರೊ
ಕಾವಿ ಬಟ್ಟೆ ಗೂಗೆಗಳನು ದುಡಿವ ಹೊಲಕೆ ತನ್ನಿರೊ
ಪ್ರಜರ ರಾಜರಾಗಿ ಮೆರೆವ ಹದ್ದು ತೋಳ ಹುಲಿಗಳ
ಬಣ್ಣ ಬಯಲಿಗೆಳೆದು ಹರಕು ಗುಡಿಸಲುಗಳಿಗೆಳೆಯಿರೊ ||೪||

ಗಿಳಿಪಾಠದ ಓದು ಓದಿ ಕೂಚು ಭಟ್ಟರಾದೆವೂ
ಕಾಗದ ಕೈಯಲ್ಲಿ ಹಿಡಿದು ಅಲೆವ ತಿರುಕರಾದೆವೂ
ಕುರ್ಚಿಕಾಲು ಹಣದ ಪಾದ ಹಿಡಿದು ಹೊಟ್ಟೆ ಹೊರೆದೆವೊ
ಗಟ್ಟಿಯಾಗಿ ನಗಲು ಬರದೆ ಬೆದರುಗೊಂಬೆಯಾದೆವೊ ||೫||

ಧಮನಿಗಳಲಿ ಉಚ್ಚೆ ನೀರು ಹರಿವರೆಲ್ಲ ಬಿದ್ದಿರಿ
ಕೆಂಪುರಕ್ತ ನಿಮಗಿದ್ದರೆ ಕ್ರಾಂತಿ ಮಾಡಲೆದ್ದಿರಿ
ಕುಷ್ಠರೋಗದಂಥ ಕೊಳೆತ ಪರಂಪರೆಯ ಒದೆಯಿರಿ
ಸಾಕು ಸಾಕು ಹಣದ ಬದುಕು ಹೋರಾಟಕೆ ಕುದಿಯಿರಿ ||೬||
**********************
೧೧.೧೧.೮೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಬ್ಬಗಳು
Next post ಸದ್ದು : ಕಿವಿಗೆ ಗುದ್ದು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys